ಶ್ರೀತಿರುಮಲ ಸಿನಿ ಎಂಟರ್ಟೈನ್ಮೆಂಟ್ ಲಾಂಛನದಲ್ಲಿ ಲಯನ್ ಶೃಂಗಾರ್ ಎಂ.ಸಂಜೀವ ಶೆಟ್ಟಿ ಹಾಗೂ ಲಯನ್ ಕೊರಿಯರ್ ಎಸ್.ವೆಂಕಟೇಶ್ ನಿರ್ಮಿಸಿರುವ ‘ಅಕ್ಷತೆ ಚಿತ್ರ ಈ ವಾರ ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ.
ರಾಜು(ದೇವಸಂದ್ರ) ಕಥೆ, ಚಿತ್ರಕಥೆ, ಸಂಭಾಷಣೆ ಬರೆದು ನಿರ್ದೇಶಿಸಿರುವ ಈ ಚಿತ್ರಕ್ಕೆ ಎನ್.ವಿ.ನಂದಕುಮಾರ್ ಅವರ ಛಾಯಾಗ್ರಹಣವಿದೆ. ವಿ.ಮನೋಹರ್ ಸಂಗೀತ ನಿರ್ದೇಶನ, ಕುಮಾರ್ ಸಂಕಲನ, ರಾಮು, ಸುರೇಶ್ ನೃತ್ಯ ನಿರ್ದೇಶನ, ಥ್ರಿಲ್ಲರ್ ಮಂಜು, ಮಾಸ್ಮಾದ ಸಾಹಸ ನಿರ್ದೇಶನ ಹಾಗೂ ಪ್ರಭು ಕಲಾ ನಿರ್ದೇಶನವಿರುವ ಈ ಚಿತ್ರದ ತಾರಾಬಳಗದಲ್ಲಿ ಕಾರ್ತಿಕ್ ಶೆಟ್ಟಿ, ಮೈತ್ರೇಯ ಗೌಡ, ರಾಜ್ ಸೂರ್ಯನ್, ವಿನಯಪ್ರಸಾದ್, ಅವಿನಾಶ್, ಚಿತ್ರಾಶೆಣೈ, ನರ್ಸ್ ಜಯಲಕ್ಷ್ಮೀ, ರಾಜು ತಾಳಿಕೋಟೆ, ಮೈಕಲ್ ಮಧು, ಕುರಿಬಾಂಡ್ ರಂಗ ಮುಂತಾದವರಿದ್ದಾರೆ.